Sunday, 1 December 2019

ದುಷ್ಟತನಕ್ಕೆ ಕೊನೆ ಯಾವಾಗ?

ಮೊನ್ನೆ ಡಾ.ಪ್ರಿಯಾಂಕ ರೆಡ್ಡಿಯವರ ಮೇಲೆ ನಡೆದ ಅತ್ಯಾಚಾರದ ಸುದ್ದಿ ಓದಿ ತುಂಬಾ ನೋವು ಉಂಟಾಯಿತು.ಕಣ್ಣೀರು ಬಂತು.ಆ ದಿನ ಪೂರ್ತಿ ಆ ನೋವು ನೆನಪು ಮಾಡಿಕೊಂಡ ಕಾರಣಕ್ಕೆ ಏನೋ ಸಣ್ಣದಾಗಿ ಎದೆ ನೋವು ಕಾಡುತ್ತಿತು. ಆ ಬಾಲೆಯ ಕನಸು ಕೊಂದ ಆ ಪಾಪಿಗಳ ಕೃತ್ಯ 
 ಮೈ ನಡುಗುವಂತಹದು.ಇಂತಹ  ಕೃತ್ಯಗಳು ಬೆಳಕಿಗೆ ಬಾರದಂತಹವುಗಳು ಬೇಕಾದಷ್ಟು ಇರಬಹುದು.ಹೆಣ್ಣು ನಯವಿನಯ ಕಲಿಯಬೇಕು ಎಂದು ಬಯಸುವ ಸಮಾಜ ಎಷ್ಟರಮಟ್ಟಿಗೆ ಗಂಡಿಗೆ ಹೆಣ್ಣುಮಕ್ಕಳಿಗೆ ಗೌರವ ರಕ್ಷಣೆ ಕೊಡಬೇಕು ಎಂದು ಕಲಿಸುವಲ್ಲಿ ಸೋಲುತ್ತಿದೆ ಎಂದು ಮನಗಾಣಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಯೋಚಿಸಬೇಕಾಗಿದೆ.ಅಂಕಪಟ್ಟಿಗಾಗಿ ಇರುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿದೆ
.ನಮ್ಮ ಮನೆಗಳಲ್ಲಿಯೇ ಗಂಡು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು.
ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಕಠಿಣವಾದಾಗ ಮಾತ್ರ ಈ ಸಮಾಜ ಎಚ್ಚೆತ್ತಕೊಳ್ಳಬಹುದು.ಗಂಡು ಮಕ್ಕಳು ಬೇಕು ಎಂದು ಹಂಬಲಪಡುವ ಪೋಷಕರು ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ 
ಜವಾಬ್ದಾರಿ ಕೂಡ ಇದೆ ಎಂಬುದನ್ನು ಮರೆಯಬಾರದು. 





     
_ ಕೂಡಕಂಡಿ ಪ್ರೀತು ರಾಜೀವ್.